ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಧಾರವಾಡದ ರೌಡಿ ಶೀಟರ ಪರವಾಗಿ, ಇನ್ಸಪೆಕ್ಟರ ಜೊತೆ ಅನುಚಿತವಾಗಿ ನಡೆದುಕೊಂಡ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ನಡೆ ಖಂಡನೀಯ ಎಂದು ಎನ್ ಎಸ್ ಯೂ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಹಬ್ಬದ ಶುಭಾಶಯ ತಿಳಿಸಲು ಹೋಗಿದ್ದ ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ಕಾಡದೇವರಮಠರನ್ನು ಕಾರ್ಯಕರ್ತರ ಮುಂದೆಯೇ ಅವಮಾನ ಮಾಡಿರುವದನ್ನು ಎನ್ ಎಸ್ ಯೂ ಐ ಖಂಡಿಸುತ್ತದೆ ಎಂದು ಫೈರೋಜ್ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಕಾನೂನುಬಾಹಿರವಾಗಿ ನಡೆದುಕೊಂಡರೆ, ಕೇಂದ್ರ ಸಚಿವರು ಕ್ರಮ ಕೈಗೊಳ್ಳಲಿ, ಅದನ್ನು ಬಿತ್ತು ಹೀಗೆ ಸರ್ಕಾರಿ ಅಧಿಕಾರಿಯನ್ನು ನಡೆಸಿಕೊಳ್ಳುವದು ಸರಿಯಲ್ಲ. ಬಹುಷ: ಜೋಶಿಯವರು ಈ ಸಲ ಸೋಲುವ ಭಯದಿಂದ ರೌಡಿ ಶೀಟರಗಳನ್ನು ವೋಟ್ ಬ್ಯಾಂಕ ಮಾಡಿಕೊಂಡಿರಬೇಕು ಎಂದು ಎನ್ ಎಸ್ ಯೂ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ ಆರೋಪಿಸಿದ್ದಾರೆ.
Author: Karnataka Files
Post Views: 4





