ಸದಾ ಸುದ್ದಿಯಲ್ಲಿರುವ ಗೋಕಾಕದ ಶಾಸಕ ರಮೇಶ ಜಾರಕಿಹೊಳಿಯವರಿಗೆ ಇದೀಗ ಕಂಟಕ ಎದುರಾಗಿದೆ. ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆಂದು ಪಡೆದ ಸಾಲ ತೀರಿಸದೆ ರಮೇಶ ಬ್ಯಾಂಕಿಗೆ ವಂಚನೆ ಮಾಡಿದ್ದಾರೆಂದು ಅಪೆಕ್ಸ್ ಬ್ಯಾಂಕ ವ್ಯವಸ್ಥಾಪಕ ನಿರ್ದೇಶಕ ನೀಡಿದ ದೂರಿನ ಅನ್ವಯ ಅವರ ಮೇಲೆ ಕೇಸ್ ಧಾಖಲಾಗಿದೆ. ರಮೇಶ್ ಮೇಲೆ ಐ ಪಿ ಸಿ ಸೆಕ್ಷನ್ 406, 420 & 34 ರ ಅಡಿ ಪ್ರಕರಣ ಧಾಖಲಾಗಿದೆ.
ಅಸಲು ಬಡ್ಡಿ ಸೇರಿ 439 ಕೋಟಿ ರೂಪಾಯಿ ಪಾವತಿಸದ ಆರೋಪ ಹೊತ್ತ ಸೌಭಾಗ್ಯಲಕ್ಸ್ಮಿ ಶುಗರ್ಸ್ ಲಿಮಿಟೆಡ್ ಎಮ್ ಡಿ ರಮೇಶ್ ಜಾರಕಿಹೊಳಿ, ತಮ್ಮ ವಿರುದ್ದ ಧಾಖಲಾದ ಎಫ್ ಐ ಆರ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಮುಂದಿನ ವಾರ ವಿಚಾರಣೆಗೆ ಪರಿಗಣಿಸುವದಾಗಿ ಹೇಳಿದ್ದಾರೆ.
ರಮೇಶ ಜಾರಕಿಹೊಳಿ ಬಂಡವಾಳದ ರೂಪದಲ್ಲಿ ಅಪೆಕ್ಸ್ ಬ್ಯಾಂಕ ಮತ್ತು ಅದರ ಸಮೂಹದ ಬ್ಯಾಂಕಗಳಲ್ಲಿ 12-07-2013 ರಿಂದ 31-03-2017 ರ ಅವಧಿಯಲ್ಲಿ 232.88 ಕೋಟಿ ಸಾಲ ಪಡೆದಿದ್ದರು, ಅದು ಈಗ ಅಸಲು ಬಡ್ಡಿ ಸೇರಿ 439.7 ಕೋಟಿಗೆ ಏರಿಕೆಯಾಗಿದ್ದರು, ಅದನ್ನು ಇನ್ನೂವರೆಗೆ ಪಾವತಿಸಿಲ್ಲ ಎಂದು ಅಪೆಕ್ಸ್ ಬ್ಯಾಂಕ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.





