Download Our App

Follow us

Home » ರಾಜಕೀಯ » ನಾಳೆ ಧಾರವಾಡದಲ್ಲಿ ಮಹಾದಾಯಿ ಹೋರಾಟಗಾರರ ಮಹತ್ವದ ಸಭೆ. ಸೊಬರದಮಠ ನೇತೃತ್ವ

ನಾಳೆ ಧಾರವಾಡದಲ್ಲಿ ಮಹಾದಾಯಿ ಹೋರಾಟಗಾರರ ಮಹತ್ವದ ಸಭೆ. ಸೊಬರದಮಠ ನೇತೃತ್ವ

ನಾಳೆ ಧಾರವಾಡದ ನವಲೂರನಲ್ಲಿರುವ ಮಯೂರ್ ರೆಸಾರ್ಟನಲ್ಲಿ ರೈತ ಸೇನಾ ಕರ್ನಾಟಕದ ಅಧ್ಯಕ್ಷ ವಿರೇಶ ಸೊಬರದಮಠ ನೇತ್ರತ್ವದಲ್ಲಿ ಸಭೆ ನಡೆಯಲಿದೆ. 

ಮಧ್ಯಾಹ್ನ 12 ಘಂಟೆಗೆ ರೈತ ಸಂಘಟನೆಗಳ ಸಭೆ ನಡೆಯಲಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗುವದೆಂದು ವಿರೇಶ ಸೊಬರದಮಠ ತಿಳಿಸಿದ್ದಾರೆ. 

ಕಳಸಾ ಬಂಡೋರಿ ಹಾಗೂ ಮಹಾದಾಯಿ ಯೋಜನೆ ಕುರಿತು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ನಿರ್ಲಕ್ಷ ತಾಳಿದ್ದಾರೆಂದು ಈಗಾಗಲೇ ಆರೋಪಿಸಿರುವ ಸೊಬರದಮಠ ನಾಳೆ ನಡೆಯುವ ಸಭೆಯಲ್ಲಿ ಚುನಾವಣೆ ಸಂಬಂಧಿತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 

ಈ ಸಭೆಯಲ್ಲಿ ನಾಲ್ಕು ಜಿಲ್ಲೆಗಳ 11 ತಾಲೂಕಿನ ರೈತರು ಭಾಗವಹಿಸಲಿದ್ದು, 2 ಸಾವಿರ ರೈತರು ಒಮ್ಮತದ ನಿರ್ಧಾರ ಮಾಡಲಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಾನು ಚೂಟಿದಂಗ್ ಮಾಡ್ತೀನಿ, ನೀ ಅತ್ತಂಗ್ ಮಾಡು. ಮಿಲಾಪಿ ಕುಸ್ತಿಗೆ ಸಾಕ್ಷಿಯಾಯ್ತೆ ಇಂದಿನ ಹೋರಾಟ

ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಕರೆ ಕೊಟ್ಟಿದ್ದ “ಬೃಹತ್” ಹೆಸರಿನ ಪ್ರತಿಭಟನೆ, ನಾ ಚೂಟಿದಂಗ್ ಮಾಡ್ತೀನಿ, ನೀ ಅತ್ತಂಗ್ ಮಾಡು ಅನ್ನೋ ಲೆಕ್ಕದಲ್ಲಿ

Live Cricket

error: Content is protected !!