Download Our App

Follow us

Home » ರಾಜಕೀಯ » ನಾಳೆ ಹುಬ್ಬಳ್ಳಿಗೆ ದಿಂಗಾಲೇಶ್ವರ ಶ್ರೀ ಎಂಟ್ರಿ. ಅದ್ದೂರಿ ಸ್ವಾಗತಕ್ಕೆ ಜೋರಾದ ಸಿದ್ಧತೆ

ನಾಳೆ ಹುಬ್ಬಳ್ಳಿಗೆ ದಿಂಗಾಲೇಶ್ವರ ಶ್ರೀ ಎಂಟ್ರಿ. ಅದ್ದೂರಿ ಸ್ವಾಗತಕ್ಕೆ ಜೋರಾದ ಸಿದ್ಧತೆ

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಅಖಾಡಾ ಸಜ್ಜಾಗಿದೆ. ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ಮಾಡುವದಾಗಿ ಹೇಳಿದ ಬಳಿಕ ಲೆಕ್ಕಾಚಾರ ಶುರುವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಖಾವಿ ವರ್ಸಸ್ ಖಾದಿ ಸ್ಪರ್ಧೆ ರಂಗು ತಂದಿದೆ.

ಸ್ಪರ್ಧೆಗೆ ನಾನ್ ರೆಡಿ ಎಂದು ಬೆಂಗಳೂರಿನಲ್ಲಿ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಬರಲಿರುವ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಭಕ್ತರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. 

ನಾಳೆ ಮಧ್ಯಾಹ್ನ 4 ಘಂಟೆಗೆ ನೆಹರು ಮೈದಾನಕ್ಕೆ ಬರುವ ದಿಂಗಾಲೇಶ್ವರ ಶ್ರೀಗಳನ್ನು ಬರಮಾಡಿಕೊಳ್ಳುವ ಭಕ್ತರು, ಅಲ್ಲಿಂದ ಮೂರು ಸಾವಿರ ಮಠದ ವರೆಗೆ ಮೆರವಣಿಗೆ ಮಾಡಲಿದ್ದಾರೆ. ನವಲಗುಂದ, ಕುಂದಗೋಳ, ಕಲಘಟಗಿ, ಧಾರವಾಡ ಗ್ರಾಮೀಣ, ಧಾರವಾಡ ಶಹರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಕ್ತರನ್ನು ಸೇರಿಸಲು ಯೋಚಿಸಲಾಗಿದ್ದು, ಅದ್ದೂರಿ ಮೆರವಣಿಗೆ ನಡೆಯಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!