Download Our App

Follow us

Home » ಕಾನೂನು » ಜೂಜು ಆಡುತ್ತಿದ್ದವರು ನೀರು ಪಾಲು. ಮೂವರ ಶವ ಹೊರಕ್ಕೆ. ಮೂವರಿಗೆ ಹುಡುಕಾಟ

ಜೂಜು ಆಡುತ್ತಿದ್ದವರು ನೀರು ಪಾಲು. ಮೂವರ ಶವ ಹೊರಕ್ಕೆ. ಮೂವರಿಗೆ ಹುಡುಕಾಟ

ಪಂಚ ನದಿಗಳ ನಾಡು ವಿಜಯಪುರದಲ್ಲಿ ನಡೆದ ಘಟನೆಯೊಂದರಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. 

ನಿನ್ನೆ ನದಿ ದಡದಲ್ಲಿ ಜೂಜು ಆಡುವ ವೇಳೆ ಪೋಲಿಸರು ದಾಳಿ ನಡೆಸಿದಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ತೆತ್ತಿದ್ದಾರೆ. ತೆಪ್ಪದ ಮೂಲಕ ಪರಾರಿಯಾಗಬೇಕು ಅನ್ನುವಷ್ಟರಲ್ಲಿ ತೆಪ್ಪ ಮುಳುಗಿದೆ. 

ಈ ಘಟನೆಯಲ್ಲಿ ಒಟ್ಟು ಮೂವರು ನೀರು ಪಾಲಾಗಿದ್ದು, ಮೂವರ ಶವ ಹೊರಕ್ಕೆ ತೆಗೆಯಲಾಗಿದೆ. 6 ಜನರ ಪೈಕಿ ಬಶೀರ ಹೊನವಾಡ ಎಂಬಾತ ಮಾತ್ರ ಪಾರಾಗಿ ಮನೆಗೆ ಬಂದಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. 

ಜಿಲ್ಲೆಯ ರಕ್ಷಣಾ ತಂಡ ಒಟ್ಟು 6 ಬೋಟಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಪೀಠಿಕೆ. ಡಿಸೆಂಬರ್ 8 ಕ್ಕೆ ಬಸವಾಭಿಮಾನಿಯ ಮದುವೆ. ವಚನ ಮಾಂಗಲ್ಯ

ಡಿಸೆಂಬರ್ 8 ರಂದು ಖಾನಾಪುರ ತಾಲೂಕಿನ ಅಂಬಡಗಟ್ಟಿಯಲ್ಲಿ ಬಸವಾಭಿಮಾನಿಯೊಬ್ಬರ ಅಪರೂಪದ ಮದುವೆ ನಡೆಯಲಿದೆ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕುಂಬಾರ ಅವರ ಮದುವೆ ಆರತಿ ಎಂಬುವವರ

Live Cricket

error: Content is protected !!