Download Our App

Follow us

Home » ಕಾನೂನು » ಈಶ್ವರಪ್ಪ ವಿರುದ್ಧ ಪ್ರತಿಭಟನೆ, ಮುಖ್ಯಮಂತ್ರಿ ಸೇರಿದಂತೆ ಎಮ್ ಬಿ ಪಾಟೀಲ, ರಾಮಲಿಂಗಾರೆಡ್ಡಿ ಹಾಗೂ ಸುರ್ಜೆವಾಲಾಗೆ ತಲಾ 10 ಸಾವಿರ ದಂಡ

ಈಶ್ವರಪ್ಪ ವಿರುದ್ಧ ಪ್ರತಿಭಟನೆ, ಮುಖ್ಯಮಂತ್ರಿ ಸೇರಿದಂತೆ ಎಮ್ ಬಿ ಪಾಟೀಲ, ರಾಮಲಿಂಗಾರೆಡ್ಡಿ ಹಾಗೂ ಸುರ್ಜೆವಾಲಾಗೆ ತಲಾ 10 ಸಾವಿರ ದಂಡ

ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಜನರಿಗೆ ಹೈಕೋರ್ಟ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದೆ. 2022 ರ ಎಪ್ರಿಲ್ 14 ರಂದು ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೇಸ್ ನಾಯಕರು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದರು.

ಈ ಸಂಬಂಧ ಹೈ ಗ್ರೌಂಡ್ಸ್ ಪೊಲೀಸರು ಕೇಸು ಧಾಖಲು ಮಾಡಿದ್ದರು. ಈ ಕೇಸಿಗೆ ಸಂಬಂಧಪಟ್ಟಂತೆ ವಿಚಾರಣಾ ಪ್ರಕ್ರಿಯೆ ರದ್ದು ಪಡಿಸುವಂತೆ ಅರ್ಜಿದಾರರು ಹೈಕೋರ್ಟ ಮೆಟ್ಟಲೇರಿದ್ದರು.

ಅರ್ಜಿದಾರರ ಮನವಿಯನ್ನು ತಿರಸ್ಕರಿದ ಹೈಕೋರ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಮ್ ಬಿ ಪಾಟೀಲ, ರಾಮಲಿಂಗಾರೆಡ್ಡಿ, ಎ ಐ ಸಿ ಸಿ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರಿಗೆ ತಲಾ 10 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡದ ಹತ್ಯೆಗಳು : ಕ್ರೈಮ್ ಲೋಕದ ಅನಾವರಣ

ಧಾರವಾಡ,  ವಿವಿಧ ಬಿರುದಾವಳಿಗಳನ್ನು ಹೊಂದಿದ ನಗರ. ತಣ್ಣನೆಯ ಗಾಳಿ, ಹಿಂದೂಸ್ಥಾನಿ ಸಂಗೀತದ ಕಂಪು, ನಿವೃತ್ತರ ಪಾಲಿಗೆ ಸ್ವರ್ಗದ ಅನುಭವ ನೀಡುವ ಧಾರವಾಡದಲ್ಲಿ  ಕ್ರೈಂ ಲೋಕ ಅನಾವರಣಗೊಳ್ಳುತ್ತಿದೆ. ಇತ್ತೀಚಿಗಂತೂ

Live Cricket

error: Content is protected !!