Download Our App

Follow us

Home » ಅಪಘಾತ » ಧಾರವಾಡದ ರಾಯಾಪುರ ಬಳಿ ತಡರಾತ್ರಿ ಭೀಕರ ಅಪಘಾತ : ಇಬ್ಬರ ಸಾವು

ಧಾರವಾಡದ ರಾಯಾಪುರ ಬಳಿ ತಡರಾತ್ರಿ ಭೀಕರ ಅಪಘಾತ : ಇಬ್ಬರ ಸಾವು

ವರದಿ – ಜೆಕೆ

ಧಾರವಾಡದ ರಾಯಾಪುರದ ಇಂಡಿಯನ್ ಆಯಿಲ್ ಬಳಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಶವಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಮೃತರ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದ ಸಂದರ್ಭದಲ್ಲಿ, ಮೃತರ ಹತ್ತಿರ ಮದ್ಯದ ಬಾಟಲಿ ಹಾಗೂ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. 

ಮೃತ ಯುವಕರನ್ನು ವಿಜಯಪುರದ ಪ್ರಜ್ವಲ್ (26) ಹಾಗೂ ಹುಬ್ಬಳ್ಳಿಯ ಶಂಕರ (26) ಎಂದು ಗುರುತಿಸಲಾಗಿದೆ.

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!