ಉತ್ತರ ಕರ್ನಾಟಕದ ಎರಡನೇ ಅತೀ ದೊಡ್ಡ ಅಂಜುಮನ್ ಇಸ್ಲಾಂ ಸಂಸ್ಥೆಗೆ ಅಧ್ಯಕ್ಷರಾಗಿ ಇಸ್ಮಾಯಿಲ್ ತಮಟಗಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಇಸ್ಮಾಯಿಲ್ ತಮಟಗಾರ ತಂಡ ಅವಿರೋಧವಾಗಿ ಆಯ್ಕೆಗೊಂಡಿದೆ.
ಧಾರವಾಡದ ಹೃದಯ ಭಾಗದಲ್ಲಿರುವ ಅಂಜುಮನ್ ಸಂಸ್ಥೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಬಡ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಇಸ್ಮಾಯಿಲ್ ತಮಟಗಾರ ಮೂರನೇ ಬಾರಿಗೆ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಸ್ಮಾಯಿಲ್, ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.
ಮುಸ್ಲಿಂ ಸಮುದಾಯ ಇಸ್ಮಾಯಿಲ್ ತಮಟಗಾರ ಬೆನ್ನಿಗೆ ನಿಂತು ಅವಿರೋಧ ಆಯ್ಕೆ ಮಾಡಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇಸ್ಮಾಯಿಲ್ ತಮಟಗಾರ ಮೇಲಿದೆ. ಉತ್ತರ ಕರ್ನಾಟಕದ ಮುಸ್ಲಿಂ ನಾಯಕನಾಗಿ ಬೆಳೆಯುತ್ತಿರುವ ಇಸ್ಮಾಯಿಲ್, ಕೋಮು ಸೌಹಾರ್ದತೆ ಸಾರುವ ಮೂಲಕ ಎಲ್ಲಾ ವರ್ಗದ ಮನಸ್ಸು ಗೆದ್ದಿದ್ದಾರೆ.

Author: Karnataka Files
Post Views: 4





