Download Our App

Follow us

Home » ರಾಜಕೀಯ » ಧಾರವಾಡ ಕಾಂಗ್ರೇಸ್ ಅಭ್ಯರ್ಥಿ ಗೊಂದಲ. ಡಾ.ನಾಲವಾಡ, ವಿನೋದ ಅಸೂಟಿ ಮಧ್ಯೆ ಫೈಟ್

ಧಾರವಾಡ ಕಾಂಗ್ರೇಸ್ ಅಭ್ಯರ್ಥಿ ಗೊಂದಲ. ಡಾ.ನಾಲವಾಡ, ವಿನೋದ ಅಸೂಟಿ ಮಧ್ಯೆ ಫೈಟ್

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿನ ಕಾಂಗ್ರೇಸ್ ಅಭ್ಯರ್ಥಿಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆ ನಡೆದಿದೆ. ದೆಹಲಿ ಮಟ್ಟದಲ್ಲಿ ಹೊಸ ಹೆಸರೊಂದು ಸೇರ್ಪಡೆಯಾಗಿದೆ.

ಧಾರವಾಡ ಕ್ಷೇತ್ರದ ಕಾಂಗ್ರೇಸ್ ಟಿಕೇಟಗಾಗಿ ಡಾ. ನಾಲವಾಡ ಹೆಸರು ಕೇಳಿ ಬಂದಿದೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ, ನಾಲವಾಡರನ್ನು ಕಾಂಗ್ರೇಸ್ಸಿಗೆ ಕರೆತಂದು ಅಭ್ಯರ್ಥಿಯನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಟಿಕೇಟಗಾಗಿ ವಿನೋದ ಅಸೂಟಿ ಮತ್ತು ಡಾ. ನಾಲವಾಡ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಇಷ್ಟು ದಿನ ಟಿಕೇಟ ರೇಸಿನಲ್ಲಿದ್ದ, ಮಾಜಿ ವಿಧಾನ ಪರಿಷತ ಸದಸ್ಯ ಮೋಹನ ಲಿಂಬಿಕಾಯಿಯವರ ಹೆಸರಿನ ಬದಲು ಇದೀಗ ನಾಲವಾಡರ ಹೆಸರು ಮುಂಚೂಣಿಯಲ್ಲಿದೆ.

ಒಂದು ವೇಳೆ ಡಾ. ನಾಲವಾಡರಿಗೆ ಕಾಂಗ್ರೇಸ್ ಟಿಕೇಟ ಸಿಕ್ಕಲ್ಲಿ, ಮೂಲ ಹಾಗೂ ವಲಸಿಗ ಕಾಂಗ್ರೇಸ್ಸಿಗರ ಮಧ್ಯೆ ಬಿರುಕು ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕುತೂಹಲಕ್ಕೂ ಕಾರಣವಾಗಲಿದೆ.

ಅಲ್ಲದೆ ವಿನೋದ ಅಸೂಟಿ ಜೊತೆ ಸುರ್ಜಿವಾಲಾ ಈಗಾಗಲೇ ಎರಡು ಸುತ್ತಿನ ಚರ್ಚೆ ನಡೆಸಿದ್ದು, ವಿನೋದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಚರ್ಚೆ ನಡೆಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಂಜಾನ್ ರೋಜಾ ಮಾಡಿದ ವಿನೋದ ಅಸೂಟಿ : ಇಫ್ತಾರ ಕೂಟ ನಡೆಸಿ ಭಾವೈಕ್ಯತೆ ಮೆರೆದ ಯುವನಾಯಕ

ಪವಿತ್ರ ರಮಜಾನ್ ಹಬ್ಬ ಆರಂಭಗೊಂಡಿದೆ. ಮುಸ್ಲಿಮ್ ಸಮಾಜದವರು ಒಂದು ತಿಂಗಳ ಉಪವಾಸ ( ರೋಜಾ ) ಮಾಡುತ್ತಾರೆ. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿನೋದ ಅಸೂಟಿಯವರು ಇಂದು

Live Cricket

error: Content is protected !!