Download Our App

Follow us

Home » ರಾಜಕೀಯ » ಲೋಕ ಕದನ. ಕಾಂಗ್ರೇಸ್ ಸರ್ಕಾರಕ್ಕೆ ಪಂಚಮಸಾಲಿ ಶಾಸಕನಿಂದ ಸವಾಲ್.

ಲೋಕ ಕದನ. ಕಾಂಗ್ರೇಸ್ ಸರ್ಕಾರಕ್ಕೆ ಪಂಚಮಸಾಲಿ ಶಾಸಕನಿಂದ ಸವಾಲ್.

ಲೋಕಸಭಾ ಚುನಾವಣೆ ಕರ್ನಾಟಕದ ರಾಜಕಾರಣವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಭಿನ್ನಮತದ ಜ್ವಾಲೆ ಹೊತ್ತಿ ಉರಿಯುತ್ತಿದೆ.

ಬಾಗಲಕೋಟ ಕ್ಷೇತ್ರದ ಲೋಕಸಭಾ ಕ್ಷೇತ್ರದ ಟಿಕೇಟ ವೀಣಾ ಕಾಶಪ್ಪನವರಗೆ ತಪ್ಪಿದ ಪರಿಣಾಮ ಪಂಚಮಸಾಲಿ ನಾಯಕ ಕಾಂಗ್ರೇಸ್ ಸರ್ಕಾರಕ್ಕೆ ಸಖತ್ ಪಂಚ ನೀಡಿದ್ದಾರೆ.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ತಮ್ಮ ಧರ್ಮ ಪತ್ನಿ ವೀಣಾಗೆ ಯಾವದೇ ಕಾರಣ ನೀಡದೆ ಟಿಕೇಟ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು, ಸಚಿವ ಶಿವಾನಂದ ಪಾಟೀಲರ ಮಗಳು ಸಂಯುಕ್ತ ಪಾಟೀಲಗೆ ಟಿಕೇಟ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

5 ವರ್ಷ ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ವೀಣಾ ಕಾಶಪ್ಪನವರ ಬದಲು ಕ್ಷೇತ್ರದ ಪರಿಚಯ ಇಲ್ಲದ ಸಂಯುಕ್ತ ಪಾಟೀಲಗೆ ಟಿಕೇಟ್ ನೀಡಲಾಗಿದೆ. ಸಂಯುಕ್ತ ಪಾಟೀಲ ಹೇಗೆ ಗೆಲ್ತಾರೆ ನೋಡ್ತೀನಿ ಎಂದು ವಿಜಯಾನಂದ ಕಾಶಪ್ಪನವರ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಂಜಾನ್ ರೋಜಾ ಮಾಡಿದ ವಿನೋದ ಅಸೂಟಿ : ಇಫ್ತಾರ ಕೂಟ ನಡೆಸಿ ಭಾವೈಕ್ಯತೆ ಮೆರೆದ ಯುವನಾಯಕ

ಪವಿತ್ರ ರಮಜಾನ್ ಹಬ್ಬ ಆರಂಭಗೊಂಡಿದೆ. ಮುಸ್ಲಿಮ್ ಸಮಾಜದವರು ಒಂದು ತಿಂಗಳ ಉಪವಾಸ ( ರೋಜಾ ) ಮಾಡುತ್ತಾರೆ. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ವಿನೋದ ಅಸೂಟಿಯವರು ಇಂದು

Live Cricket

error: Content is protected !!