Download Our App

Follow us

Home » ರಾಜಕೀಯ » ಕಾಂಗ್ರೇಸ್ ಸರ್ಕಾರದ ಖಜಾನೆ ಖಾಲಿಯಾಗಿದೆ, ಬ್ರಷ್ಟಾಚಾರ ಹೆಚ್ಚಾಗಿದೆ : ಜಗದೀಶ ಶೆಟ್ಟರ

ಕಾಂಗ್ರೇಸ್ ಸರ್ಕಾರದ ಖಜಾನೆ ಖಾಲಿಯಾಗಿದೆ, ಬ್ರಷ್ಟಾಚಾರ ಹೆಚ್ಚಾಗಿದೆ : ಜಗದೀಶ ಶೆಟ್ಟರ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕಾಂಗ್ರೇಸ್ ಅಂಗಳದಿಂದ ಹೊರಗೆ ಬಂದ ಬಳಿಕ ಮೊದಲ ಬಾರಿಗೆ ಕಾಂಗ್ರೇಸ್ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಜಗದೀಶ ಶೆಟ್ಟರ, ಕಾಂಗ್ರೇಸ್ ಸರ್ಕಾರದಲ್ಲಿ ನಡೆದಿರುವ ಬ್ರಷ್ಟಾಚಾರದ ಬಗ್ಗೆ ಕಿಡಿ ಕಾರಿದ್ದಾರೆ. ಕಾಂಗ್ರೇಸ್ ಸರ್ಕಾರದಲ್ಲಿ ಫೈಲ್ ಗಳು ಕ್ಲಿಯರ್ ಆಗ್ತಿಲ್ಲ ಎಂದಿದ್ದಾರೆ. ಬ್ರಷ್ಟಾಚಾರ ತಾಂಡವವಾಡುತ್ತಿದ್ದು, ಹಣ ಇಲ್ಲದೆ ಯಾವ ಕೆಲಸವು ನಡೆಯಲ್ಲ ಎಂದು ಶೆಟ್ಟರ ಆರೋಪಿಸಿದ್ದಾರೆ. 

ಬಿಜೆಪಿ ತೊರೆದು ಕಾಂಗ್ರೇಸ್ ಸೇರಿದ್ದ ಜಗದೀಶ ಶೆಟ್ಟರ, ಬಿಜೆಪಿ ಮುಳುಗುವ ಹಡಗು ಎಂದಿದ್ದ ಶೆಟ್ಟರ, ಬಿಜೆಪಿ ನಾಯಕನಿಲ್ಲದ ಪಕ್ಷ ಎಂದು ಹೇಳಿದ್ದರು. ಇದೀಗ ಮತ್ತೆ ಬಿಜೆಪಿಗೆ ವಾಪಸಾದ ಬಳಿಕ ಕಾಂಗ್ರೇಸ್ ಮೇಲೆ ಕಿಡಿ ಕಾರಿರುವ ಜಗದೀಶ ಶೆಟ್ಟರ, ಕಾಂಗ್ರೇಸ್ ಸರ್ಕಾರದಿಂದ ಜನ ರೋಸಿ ಹೋಗಿದ್ದಾರೆ ಎಂದಿದ್ದಾರೆ.

ಮತ್ತೊಂದು ಸ್ಪೋಟಕ ಸುದ್ದಿ ನೀಡಿರುವ ಶೆಟ್ಟರ, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಪ್ರಲ್ಹಾದ ಜೋಶಿಯವರಿಗೆ ನಾನೇ ಪಕ್ಷದ ಟಿಕೇಟ್ ಕೊಡಿಸಿದ್ದೆ ಎಂದು ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ತಯಾರಿ : ಹೊಸ ಮುಖಕ್ಕೆ ಮಣೆ : ಅಚ್ಚರಿ ಅಭ್ಯರ್ಥಿ ಕಣಕ್ಕೆ

ಧಾರವಾಡ ಗ್ರಾಮೀಣ ಶಾಸಕರಾಗಿದ್ದ ವಿನಯ ಕರ್ಣಿಯವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗುವಂತೆ, ಇತ್ತ ಬಿಜೆಪಿ ಉಪ ಚುನಾವಣೆಗೆ ತಯಾರಿ ನಡೆಸಿದೆ. ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ

Live Cricket

error: Content is protected !!