ಕನ್ನಡ ಸುದ್ದಿ ಮಾಧ್ಯಮ ಲೋಕದಲ್ಲಿ ಹೆಸರು ಮಾಡಿದ್ದ ಸಮಯ ನ್ಯೂಸ್ ಮತ್ತೆ ಆರಂಭವಾಗುತ್ತಿದೆ.
ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಸಮಯ ನ್ಯೂಸ್ ನ್ನು ಉಧ್ಯಮಿ ವಿಜಯ್ ಟಾಟಾ ಅವರ ನೇತೃತ್ವದಲ್ಲಿ ಮತ್ತೆ ಆರಂಭ ಮಾಡಲಾಗುತ್ತಿದೆ.
ಬಿ ರಮಣ್, ಹಾಗೂ ವಿಜಯ ಟಾಟಾ ಅವರ ನೇತೃತ್ವದಲ್ಲಿ ಸಮಯ ನ್ಯೂಸ್ ಜೊತೆ ಪ್ರಜಾ ಟಿ ವಿ ಸಹ ಆರಂಭವಾಗಲಿದೆ..
ಇದೇ ಶುಕ್ರವಾರದಂದು ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿ ಇರುವ ನೂತನ ಕಚೇರಿಯಲ್ಲಿ ಎರಡು ಸಂಸ್ಥೆಗಳು ಒಟ್ಟಾಗಿ ಕಾರ್ಯಾರಂಭಮಾಡಲಿವೆ.
ಪಬ್ಲಿಕ್, ಪವರ್, ಸುವರ್ಣ, ನ್ಯೂಸ್ 18, ಟಿ ವಿ 9, ರಿಪಬ್ಲಿಕ್ ವಾಹಿನಿ ಬಳಿಕ ಇದೀಗ ಇವೆರೆಡು ಸುದ್ದಿ ವಾಹಿನಿಗಳು ಸುದ್ದಿ ಬಿತ್ತರಿಸಲಿವೆ.
Author: Karnataka Files
Post Views: 7





